ಯುವ ರೈತ ಬಾಬರ ಶಹಾ ಮಾತನಾಡಿ, ‘ನಾವು 2 ಎಮ್ಮೆಗಳಿಂದ ಹೈನುಗಾರಿಕೆ ಆರಂಭಿಸಿದ್ದು ಈಗ 26 ಎಮ್ಮೆಗಳನ್ನು ಹೊಂದಿದ್ದೇವೆ. ಸ್ಥಳೀಯವಾಗಿ ಹಾಲಿಗೆ ಹೆಚ್ಚಿನ ಬೇಡಿಕೆ ಇದ್ದು ರೈತರು ಹೈನುಗಾರಿಕೆ ಮಾಡಿ ಅಧಿಕ ಲಾಭ ಗಳಿಸಬಹುದಾಗಿದೆ. ಊರಲ್ಲಿನ ಹೋಟೆಲ್ ಹಾಗೂ ಮನೆಗಳಿಗೆ ತಾವು ಹಾಲು ಸರಬರಾಜು ಮಾಡುತ್ತೇವೆ. ಪಶು ವೈದ್ಯರ ಸಹಕಾರ ಹಾಗೂ ಬೆಂಬಲ ನಮಗಿದೆ’ ಎಂದರು. ಕಿಟಸರ್ಡ್ ಸಂಸ್ಥೆಯ ಅವಿನಾಶ ಸಿಂಧೆ, ಜಾನುವಾರು ಅಧಿಕಾರಿ ಮನೋಹರ ಕುಲಕರ್ಣಿ, ಸಹಾಯಕ ತಿಪ್ಪಣ್ಣ ಹಾಗೂ 36 ಫಲಾನುಭವಿಗಳು ಇದ್ದರು.