ಈ ಬಗ್ಗೆ ಅಮೀರ್ ಖಾನ್ ‘ಝೀ ಇಟಿಸಿ’ ಟಿ.ವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ನಾನು ನಿರ್ದೇಶಕ ಶಂಕರ್ ಮತ್ತು ರಜನಿಕಾಂತ್ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ಈ ಸಿನಿಮಾಗೆ ಶಂಕರ್ ಅದ್ಬುತವಾಗಿ ಚಿತ್ರಕತೆ ಬರೆದಿದ್ದಾರೆ. ‘ಈ ಪಾತ್ರವನ್ನು ನಿರ್ವಹಿಸಲು ನನ್ನಿಂದ ಸಾಧ್ಯವಿಲ್ಲ , ಅದು ರಜನಿಕಾಂತ್ ಅವರಿಂದ ಮಾತ್ರ ಸಾಧ್ಯ’ ಎಂದು ಶಂಕರ್ಗೆ ತಿಳಿಸಿದೆ ಎಂದು ಅಮೀರ್ ಖಾನ್ ಸಂದರ್ಶನದಲ್ಲಿ ತಿಳಿಸಿದ್ದಾರೆ.