ವೈ.ಎನ್.ಹೊಸಕೋಟೆ: ಹೋಬಳಿಯ ಎತ್ತಿನಹಳ್ಳಿ ಗ್ರಾಮದ ರಸ್ತೆಯಲ್ಲಿ ಎಲ್ಲೆಂದರಲ್ಲಿ ಗುಂಡಿ ಬಿದ್ದಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಈಚೆಗೆ ಬಿದ್ದ ಮಳೆ ನೀರು ಗುಂಡಿಗಳಲ್ಲಿ ನಿಂತಿದೆ. ವಾಹನಗಳೂ ಗುಂಡಿಗಳಲ್ಲಿ ಎದ್ದು ಬಿದ್ದು ಸಾಗುತ್ತಿವೆ.
‘ವಾಹನಗಳು ಸಂಚರಿಸುವಾಗ ಕೆಸರು ನೀರು ಸಾರ್ವಜನಿಕರಿಗೆ ಸಿಡಿಯುತ್ತದೆ. ನಮ್ಮ ಮನೆಗಳಿಗೂ ನೀರು ಸಿಡಿಯುತ್ತದೆ. ಶಾಲೆಗಳ ಕಂಪೌಂಡ್ ಗೋಡೆಗಳು ಅಂದಗಟ್ಟಿವೆ’ ಎಂದು ರಸ್ತೆ ಪಕ್ಕದ ನಿವಾಸಿಗಳು ಸಮಸ್ಯೆ ವಿವರಿಸುತ್ತಾರೆ.
‘ದ್ವಿಚಕ್ರ ವಾಹನ ಸವಾರರು ಈ ರಸ್ತೆ ಗುಂಡಿಗಳಲ್ಲಿ ಬಿದ್ದಿರುವ ಉದಾಹರಣೆಗಳು ಇವೆ. ಸಂಬಂಧಿಸಿದ ಇಲಾಖೆಯವರು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು. ಬೇಗ ರಸ್ತೆ ದುರಸ್ತಿ ಮಾಡಬೇಕು’ ಎಂದು ಸ್ಥಳೀಯರಾದ ರಾಮಾಂಜಿ, ನವೀನ್, ನಾಗೇಂದ್ರಪ್ಪ ಒತ್ತಾಯಿಸಿದ್ದಾರೆ.