ಅಲ್ಪಸಂಖ್ಯಾತರ ಓಲೈಕೆಯೆಂಬ ಬಿಳಲು ಸಹಾಯಕ್ಕೆ ಬರುವ ಕಾಲ ಹಿಂದಕ್ಕಾಯಿತು, ಈಗ ಪಕ್ಷದ ತಾಯಿ ಬೇರೇ ದುರ್ಬಲವಾಗಿದೆ. ಅದು ದೊಡ್ಡದು ಮಾಡಿ ಹೇಳಹೋಗುವ ಸುಲ್ತಾನ್ ದೂರದೃಷ್ಟಿ, ಆಡಳಿತ ಜಾಣ್ಮೆ ಮತ್ತು ದೇಶಭಕ್ತಿಯಾಗಲೀ, ಬಿಜೆಪಿ ಪಟ್ಟು ಹಿಡಿದು ವಿರೋಧಿಸುವ ಟಿಪ್ಪು ಮತಾಂಧತೆ ಮತ್ತು ಸ್ವಾರ್ಥವಾಗಲೀ, ಇಂದು ಕೇವಲ ಸಮಯದ ರಾಜಕೀಯವೆಂಬುದು ಜನರು ಬಲ್ಲ ಸಂಗತಿ.