‘ಚುನಾವಣೆ ಮಾತ್ರ ರಾಜಕಾರಣವಲ್ಲ. ಜನಪರ ಹೋರಾಟ, ರಚನಾತ್ಮಕ ಕೆಲಸ, ಸೈದ್ಧಾಂತಿಕ ಸಂವಾದ ಹಾಗೂ ಅಂತರಂಗದ ಸಮತ್ವ ಕೂಡ ರಾಜಕಾರಣ. ಸಮಾಜದ ಬಗೆಗೆ ಸಮಗ್ರ ನೋಟ ನೀಡಲು ಸ್ವರಾಜ್ ಇಂಡಿಯಾ ನಮ್ಮೆದುರು ಬಂದಿದೆ. ಇದಕ್ಕೆ ಸಿದ್ಧವಾದ ಹೆಜ್ಜೆ, ನುಡಿಗಳನ್ನು ಹುಡುಕಬೇಕಿದೆ. ಸಹನೆ, ಪ್ರೀತಿ, ಸಹಬಾಳ್ವೆ ಹಾಗೂ ಸಮಾನತೆಯತ್ತ ಹೆಜ್ಜೆ ಹಾಕಬೇಕು’ ಎಂದರು.