ಗ್ರಾಮದ ರುದ್ರಣ್ಣ ಮಾತನಾಡಿ, ‘ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಈ ಭಾಗದವರೇ. ಆದರೂ ಇದುವರೆಗೂ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿಲ್ಲ. ಯಾರಿಗೂ ಗಂಗಾಕಲ್ಯಾಣ ಯೋಜನೆ ಭಾಗ್ಯ ದೊರಕಿಲ್ಲ’ ಎಂದರು. ಜೆ.ಸಿ.ಪುರ ಗೋವಿಂದರಾಜು, ಪಿ.ಕೃಷ್ಣಮೂರ್ತಿ ಕಾಲೊನಿಗೆ ಭೇಟಿ ನೀಡಿದ ತಂಡದಲ್ಲಿ ಇದ್ದರು.