‘ಸಂಸದೀಯ ವ್ಯವಸ್ಥೆಯನ್ನು ಮೋದಿ ಹಾಳುಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಹಿಟ್ಲರ್ನಂತೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಅದರ ಪರಿಣಾಮವಾಗಿ ಇಂದು ಜಿಎಸ್ಟಿ, ನೋಟು ರದ್ದತಿ ಯೋಜನೆಗಳನ್ನು ದೇಶದ ಜನರ ಮೇಲೆ ಹೇರಿದ್ದಾರೆ. ಅವುಗಳಿಂದ ದುಷ್ಪರಿಣಾಮ ಉಂಟಾಗಿರುವ ಕಾರಣ ‘ಇದು ಎಲ್ಲರ ತೀರ್ಮಾನ’ ಎಂದು ಹೇಳಿಕೆ ನೀಡುವ ಮೂಲಕ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದರು.