ತಿರುವನಂತಪುರ: ಶಿಕ್ಷಕರ ಕಿರುಕುಳದಿಂದ ನೊಂದು ಶಾಲಾ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ 15 ವರ್ಷದ ಗೌರಿ ಎಂಬ ವಿದ್ಯಾರ್ಥಿನಿ, ಚಿಕಿತ್ಸೆ ಫಲಕಾರಿಯಾಗದೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾಳೆ.
ಕೊಲ್ಲಂನ ಟ್ರಿನಿಟಿ ಲೈಸಿಎಂ ಶಾಲೆಯ 10ನೇ ತರಗತಿ ಓದುತ್ತಿದ್ದ ಗೌರಿ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ್ದಳು.
ಇದೇ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಗೌರಿಯ ಸಹೋದರಿ ತರಗತಿ ನಡೆಯುವ ವೇಳೆ ಸಹಪಾಠಿಗಳೊಂದಿಗೆ ಮಾತನಾಡಿದ್ದಕ್ಕೆ, ಶಿಕ್ಷಕರೊಬ್ಬರು ಆಕೆಯನ್ನು ಬಾಲಕರೊಂದಿಗೆ ಕೂರಿಸಿ ಶಿಸ್ತಿನ ಕ್ರಮ ಜರುಗಿಸಿದ್ದರು. ಇದರಿಂದಾಗಿ ಕೆಲವು ಸಹಪಾಠಿಗಳು ಆಕೆಯನ್ನು ಗೇಲಿ ಮಾಡಿದ್ದರು.