ಆನೇಕಲ್ : ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಕೆರೆ ಕುಂಟೆಗಳು ತುಂಬಿ ಕೋಡಿ ಹೋಗಿವೆ. ತಾಲ್ಲೂಕಿನ ಇಗ್ಗಲೂರು ಕೆರೆಯ ಏರಿ ಹಾಗೂ ಕೆರೆಗೆ ಕೈಗಾರಿಕೆಗಳು ಹಾಗೂ ಕೋಳಿ ತ್ಯಾಜ್ಯ, ಕಟ್ಟಡಗಳ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ಇದರಿಂದಾಗಿ ಗಬ್ಬು ನಾರುತ್ತಿದ್ದು ಜನರು ಈ ರಸ್ತೆಯಲ್ಲಿ ಸಂಚರಿಸಲು ಪರದಾಡಬೇಕಾಗಿದೆ.