ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಜನರಿಗೆ ಮರಿದೇವರು ಪ್ರತಿಷ್ಠಾನ ಪ್ರಶಸ್ತಿ

Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಂಗಭೂಮಿ ಕಲಾವಿದೆ ಬಿ. ಜಯಶ್ರೀ ಸೇರಿ ವಿವಿಧ ಕ್ಷೇತ್ರಗಳ ಆರು ಸಾಧಕರು ಕನ್ನಡ ಸಾಹಿತ್ಯ ಪರಿಷತ್ತಿನ 2017ನೇ ಸಾಲಿನ
‘ಪ್ರೊ. ಸಿ.ಎಚ್‌. ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ವಿ.ಪಿ. ನಿರಂಜನಾರಾಧ್ಯ (ಶಿಕ್ಷಣ), ಜರಗನಹಳ್ಳಿ ಶಿವಶಂಕರ (ಸಾಹಿತ್ಯ), ಎಲ್. ನಾರಾಯಣರೆಡ್ಡಿ (ಕೃಷಿ ಹಾಗೂ ನೀರಾವರಿ), ಪ್ರದೀಪಕುಮಾರ್ ಹೆಬ್ರಿ (ಕನ್ನಡ ಸೇವೆ) ಮತ್ತು ಪಿ. ಮಂಜುನಾಥ (ಸೆಪಕ್ ಟಕ್ರಾ–ಕ್ರೀಡೆ) ಅವರನ್ನು ಕ.ಸಾ.ಪ ಅಧ್ಯಕ್ಷ ಮನು ಬಳಿಗಾರ ಅಧ್ಯಕ್ಷತೆ ಸಮಿತಿ ಆಯ್ಕೆ ಮಾಡಿದೆ.

ತಲಾ ₹15,000 ನಗದು ಪುರಸ್ಕಾ ರವನ್ನು ಈ ಪ್ರಶಸ್ತಿ ಒಳಗೊಂಡಿದೆ. ಡಿ.8ರಂದು ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT