ಚಿಂಚೋಳಿ: ತಾಲ್ಲೂಕಿನಲ್ಲಿ ಹೆಚ್ಚಾಗಿ ಬೆಳೆಯಲ್ಪಡುವ ಅರಿಷಿಣ ಬೆಳೆಯಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಸುರಿದ ಮಳೆಯಿಂದ ಬುಡ ಕೊಳೆ ರೋಗ ಕಾಣಿಸಿಕೊಂಡಿದೆ ಎಂದು ರೈತರು ತಿಳಿಸಿದ್ದಾರೆ.
‘ಬೆಳೆಯ ಎಲೆಗಳಲ್ಲಿ ಚುಕ್ಕಿಗಳು ಕಾಣಿಸಿಕೊಂಡು ನಿಧಾನವಾಗಿ ಚುಕ್ಕೆ ಎಲೆಯ ತುಂಬಾ ವಿಸ್ತಾರಗೊಳ್ಳುತ್ತಾ ಸಾಗಿ ಕೊನೆಗೆ ಎಲೆ ಒಣಗಿದಂತಾಗುತ್ತದೆ. ಒಂದರ ನಂತರ ಒಂದರಂತೆ ಎಲ್ಲಾ ಎಲೆಗಳಲ್ಲೂ ಇದೇ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ’ ಎಂದು ದೇಗಲಮಡಿಯ ರೈತ ಸಿದ್ದು ಮಗಿ ತಿಳಿಸಿದ್ದಾರೆ.
‘ಅಧಿಕ ಮಳೆಯಿಂದ ಉಂಟಾಗುವ ತೇವಾಂಶ ಹೆಚ್ಚಳ ಮತ್ತು ಮೋಡ ಕವಿದ ವಾತಾವರಣದಿಂದ ಅರಿಷಿಣ ಬೆಳೆಗೆ ಬುಡ ಕೊಳೆ ರೋಗ ಬಂದಿದೆ. ಇದರ ನಿಯಂತ್ರಣಕ್ಕೆ ಕಾಪರ್ ಆಕ್ಸಿ ಕ್ಲೋರೈಡ್ 2 ಗ್ರಾಂ ಪ್ರತಿ ಲೀಟರ್ ಹಾಕಿ ಡ್ರೆಂಚಿಂಗ್ ಮಾಡಬೇಕು.
ಇದನ್ನು ನಿಯಂತ್ರಣಕ್ಕೆ ತರದಿದ್ದರೆ ಗಡ್ಡೆ ಕೊಳೆಯುವ ಸಾಧ್ಯತೆ ಹೆಚ್ಚಾಗುತ್ತದೆ’ ಎಂದು ರಾಯಚೂರು ಕೃಷಿ ವಿವಿಯ ಸಸ್ಯ ರೋಗ ತಜ್ಞ ಡಾ. ಜಹೀರ್ ಅಹಮದ್ ತಿಳಿಸಿದ್ದಾರೆ.
ಅಷಿರಿಣ ಬೆಳೆಯ ಗಿಡವೊಂದು ತಳಬಾಗದಿಂದ ಮೇಲ್ಭಾಗದವರೆಗೆ ಪೂರ್ಣಪ್ರಮಾಣದಲ್ಲಿ ಈ ರೂಗಕ್ಕೆ ತುತ್ತಾಗಿದ್ದರೆ ಅದರ ಗಡ್ಡೆ ಪೂರ್ಣಪ್ರಮಾಣದಲ್ಲಿ ಕರಗಿದೆ ಎಂದರ್ಥ ಎಂದರು.