ಉತ್ತರಾಖಂಡದಲ್ಲಿ ಇತ್ತೀಚೆಗೆ ಮೃತಪಟ್ಟ 11 ವರ್ಷದ ಬಾಲಕಿಯ ಪ್ರಕರಣವನ್ನು ಅವರು ಉಲ್ಲೇಖಿಸಿದರು. ಆ ಬಾಲಕಿಗೆ ಬಿಸಿಯೂಟ ನಿರಾಕರಿಸಿರಲಿಲ್ಲ. ಆದರೆ, ಶಾಲೆ ರಜೆ ಇದ್ದುದರಿಂದ ಬಿಸಿಯೂಟ ದೊರೆತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಹಸಿವಿನಿಂದಾಗಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ಆಕೆಯ ಮನೆಯವರು ಹೇಳಿದ್ದರು. ಸಾವಿಗೆ ಕಾರಣ ಮಲೇರಿಯಾ ಎಂಬುದು ಅಧಿಕಾರಿಗಳ ವಾದವಾಗಿದೆ.