ವೀರಶೈವ ಲಿಂಗಾಯತರಿಗೆ ಧಾರ್ಮಿಕ ಅಲ್ಪ ಸಂಖ್ಯಾತರ ಸ್ಥಾನ ದೊರೆತರೆ ಅದರ ಲಾಭವಾಗುವುದು ದೊಡ್ಡದೊಡ್ಡ ಶಿಕ್ಷಣ ಸಂಸ್ಥೆ ಕಟ್ಟಿಕೊಂಡವರಿಗೆ. ಆ ಸಮಾಜದ ಬಡವರು, ರೈತರು, ಸಂಕಷ್ಟದಲ್ಲಿ ಇರುವವರಿಗೆ ಯಾವುದೇ ಲಾಭವಿಲ್ಲ. ಶಿಕ್ಷಣ ಸಂಸ್ಥೆ ಸ್ಥಾಪಿಸಿ ಲಾಭ ಮಾಡಿಕೊಂಡವರು ತಮ್ಮ ಸಮಾಜದ ಎಷ್ಟು ಜನರಿಗೆ ಉಚಿತ ಸೀಟು ನೀಡಿದ್ದಾರೆ ಎಂದು ಪ್ರಶ್ನಿಸಿದರು.