ಸ್ಥಳೀಯರು, ವರ್ತಕರು ಇಲ್ಲಿ ತಂದು ಸುರಿಯುವ ತ್ಯಾಜ್ಯವನ್ನು ನಗರಸಭೆಯವರು ನಿಯಮಿತವಾಗಿ ವಿಲೇವಾರಿ ಮಾಡುತ್ತಿಲ್ಲ. ಅನೇಕ ಬಾರಿ ಇಲ್ಲಿ ಕಸದ ರಾಶಿಯನ್ನು ನಾಯಿಗಳು, ಬೀದಿ ದನಗಳು ಆಹಾರಕ್ಕಾಗಿ ಎಲ್ಲೆಂದರಲ್ಲಿ ಹರಡುತ್ತವೆ. ಆಗೆಲ್ಲ ರಸ್ತೆಯ ಸ್ಥಿತಿ ಅಯೋಮಯವಾಗಿರುತ್ತದೆ. ನಗರಸಭೆಯವರು ಇನ್ನಾದರೂ ಇತ್ತ ಗಮನ ಹರಿಸಲಿ.
ಸಲ್ಮಾನ್,
ಸ್ಥಳೀಯ ನಿವಾಸಿ