<p><strong>ಅಹಮದಾಬಾದ್:</strong> ಕ್ರೈಸ್ತರು ಸೇರಿದಂತೆ ಇತರ ಹಲವು ನಂಬಿಕೆಗಳನ್ನು ಹೊಂದಿರುವ ಜನರ ಸೇವೆ ಮಾಡಲು ದೇಶಭಕ್ತಿಯೆ ಪ್ರೇರಣೆ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.</p>.<p>ಗಾಂಧಿನಗರದ ಆರ್ಚ್ಬಿಷಪ್ ಬರೆದಿರುವ ಪತ್ರವನ್ನು ನೇರವಾಗಿ ಉಲ್ಲೇಖಿಸದ ಅವರು ಪತ್ರದಲ್ಲಿನ ‘ರಾಷ್ಟ್ರೀಯವಾದಿ ಶಕ್ತಿಗಳಿಂದ ದೇಶವನ್ನು ರಕ್ಷಿಸಿ’ ಎಂಬ ಮಾತಿಗೆ ಪ್ರತಿಕ್ರಿಯಿಸಿದರು.</p>.<p>ಸ್ವಾಮಿನಾರಾಯಣ ಗುರುಕುಲ ವಿಶ್ವವಿದ್ಯಾ ಪ್ರತಿಷ್ಠಾನ ಅಹಮದಾಬಾದ್ನಲ್ಲಿ ನಿರ್ಮಿಸಿರುವ ಆಸ್ಪತ್ರೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಆರ್ಚ್ಬಿಷಪ್ ಥಾಮಸ್ ಮ್ಯಾಕನ್ ನವೆಂಬರ್ನಲ್ಲಿ ಸಮುದಾಯದ ಜನರಿಗೆ ಬಹಿರಂಗ ಪತ್ರ ಹೊರಡಿಸಿ, ‘ನಮ್ಮ ದೇಶದ ಜ್ಯಾತ್ಯತೀತ ಮತ್ತು ಪ್ರಜಾಸತ್ತಾತ್ಮಕತೆ ಸಡಿಲಗೊಳ್ಳುತ್ತಿದೆ. ರಾಷ್ಟ್ರೀಯವಾದಿ ಶಕ್ತಿಗಳಿಂದ ದೇಶವನ್ನು ರಕ್ಷಿಸುವಂತೆ ದೇವರಲ್ಲಿ ಪ್ರಾರ್ಥಿಸಿ’ ಎಂದು ಮನವಿ ಮಾಡಿದ್ದರು.</p>.<p>‘ಧಾರ್ಮಿಕ ವ್ಯಕ್ತಿಯೊಬ್ಬ ಫತ್ವಾ ಹೊರಡಿಸಿ ರಾಷ್ಟ್ರೀಯವಾದಿ ಶಕ್ತಿಗಳನ್ನು ಕಿತ್ತೊಗೆಯಿರಿ ಎಂದೇಳುತ್ತಾರೆ. ಇದನ್ನು ಕೇಳಿ ನನಗೆ ಆಶ್ಚರ್ಯವಾಗುತ್ತಿದೆ. ಭಾರತೀಯರ ಸೇವೆ ಮಾಡಲು ಅದೇ ದೇಶಭಕ್ತಿ ನಮ್ಮನ್ನು ಪ್ರೇರೇಪಿಸುತ್ತಿದೆ’ ಎಂದು ಮೋದಿ ಹೇಳಿದರು.</p>.<p>‘ದೇಶಭಕ್ತಿ ಮೌಲ್ಯದ ಕುರಿತ ಇಂತಹ ಹೇಳಿಕೆಗಳು ನಮ್ಮಲ್ಲಿ ಕಳವಳ ಉಂಟುಮಾಡುತ್ತವೆ’ ಎಂದರು.</p>.<p>ಈ ಬಗೆಯ ಪತ್ರ ಬರೆದಿರುವ ಆರ್ಚ್ಬಿಷಪ್ ಥಾಮಸ್ ಮ್ಯಾಕನ್ ಅವರಿಗೆ ಗುಜರಾತ್ ಚುನಾವಣಾ ಆಯೋಗ ನೋಟಿಸ್ ಕಳುಹಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್:</strong> ಕ್ರೈಸ್ತರು ಸೇರಿದಂತೆ ಇತರ ಹಲವು ನಂಬಿಕೆಗಳನ್ನು ಹೊಂದಿರುವ ಜನರ ಸೇವೆ ಮಾಡಲು ದೇಶಭಕ್ತಿಯೆ ಪ್ರೇರಣೆ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.</p>.<p>ಗಾಂಧಿನಗರದ ಆರ್ಚ್ಬಿಷಪ್ ಬರೆದಿರುವ ಪತ್ರವನ್ನು ನೇರವಾಗಿ ಉಲ್ಲೇಖಿಸದ ಅವರು ಪತ್ರದಲ್ಲಿನ ‘ರಾಷ್ಟ್ರೀಯವಾದಿ ಶಕ್ತಿಗಳಿಂದ ದೇಶವನ್ನು ರಕ್ಷಿಸಿ’ ಎಂಬ ಮಾತಿಗೆ ಪ್ರತಿಕ್ರಿಯಿಸಿದರು.</p>.<p>ಸ್ವಾಮಿನಾರಾಯಣ ಗುರುಕುಲ ವಿಶ್ವವಿದ್ಯಾ ಪ್ರತಿಷ್ಠಾನ ಅಹಮದಾಬಾದ್ನಲ್ಲಿ ನಿರ್ಮಿಸಿರುವ ಆಸ್ಪತ್ರೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಆರ್ಚ್ಬಿಷಪ್ ಥಾಮಸ್ ಮ್ಯಾಕನ್ ನವೆಂಬರ್ನಲ್ಲಿ ಸಮುದಾಯದ ಜನರಿಗೆ ಬಹಿರಂಗ ಪತ್ರ ಹೊರಡಿಸಿ, ‘ನಮ್ಮ ದೇಶದ ಜ್ಯಾತ್ಯತೀತ ಮತ್ತು ಪ್ರಜಾಸತ್ತಾತ್ಮಕತೆ ಸಡಿಲಗೊಳ್ಳುತ್ತಿದೆ. ರಾಷ್ಟ್ರೀಯವಾದಿ ಶಕ್ತಿಗಳಿಂದ ದೇಶವನ್ನು ರಕ್ಷಿಸುವಂತೆ ದೇವರಲ್ಲಿ ಪ್ರಾರ್ಥಿಸಿ’ ಎಂದು ಮನವಿ ಮಾಡಿದ್ದರು.</p>.<p>‘ಧಾರ್ಮಿಕ ವ್ಯಕ್ತಿಯೊಬ್ಬ ಫತ್ವಾ ಹೊರಡಿಸಿ ರಾಷ್ಟ್ರೀಯವಾದಿ ಶಕ್ತಿಗಳನ್ನು ಕಿತ್ತೊಗೆಯಿರಿ ಎಂದೇಳುತ್ತಾರೆ. ಇದನ್ನು ಕೇಳಿ ನನಗೆ ಆಶ್ಚರ್ಯವಾಗುತ್ತಿದೆ. ಭಾರತೀಯರ ಸೇವೆ ಮಾಡಲು ಅದೇ ದೇಶಭಕ್ತಿ ನಮ್ಮನ್ನು ಪ್ರೇರೇಪಿಸುತ್ತಿದೆ’ ಎಂದು ಮೋದಿ ಹೇಳಿದರು.</p>.<p>‘ದೇಶಭಕ್ತಿ ಮೌಲ್ಯದ ಕುರಿತ ಇಂತಹ ಹೇಳಿಕೆಗಳು ನಮ್ಮಲ್ಲಿ ಕಳವಳ ಉಂಟುಮಾಡುತ್ತವೆ’ ಎಂದರು.</p>.<p>ಈ ಬಗೆಯ ಪತ್ರ ಬರೆದಿರುವ ಆರ್ಚ್ಬಿಷಪ್ ಥಾಮಸ್ ಮ್ಯಾಕನ್ ಅವರಿಗೆ ಗುಜರಾತ್ ಚುನಾವಣಾ ಆಯೋಗ ನೋಟಿಸ್ ಕಳುಹಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>