ಸ್ವರ್ಣ ಮಂದಿರಕ್ಕೂ ಭೇಟಿ: ಸಾದಿಕ್ ಅವರು ಸ್ವರ್ಣ ಮಂದಿರಕ್ಕೂ ಭೇಟಿ ನೀಡಿ ನಮನ ಸಲ್ಲಿಸಿದರು. ‘ಅಮೃತಸರಕ್ಕೆ ಭೇಟಿ ನೀಡಿದ್ದು ನನ್ನ ಭಾಗ್ಯ. ಇಲ್ಲಿನ ಸ್ನೇಹಪರತೆ, ಆತಿಥ್ಯ, ಅಧ್ಯಾತ್ಮ ನಮಗೆ ಪಾಠ. ನನ್ನೊಂದಿಗೆ ಸದಾ ಉಳಿಯುವ ನೆನಪುಗಳನ್ನು ನೀಡಿದ್ದಕ್ಕೆ ಧನ್ಯವಾದಗಳು’ ಎಂದು ತಮ್ಮ ಅನಿಸಿಕೆಯನ್ನು ಸಂದರ್ಶಕರ ಪಟ್ಟಿಯಲ್ಲಿ ಹಂಚಿಕೊಂಡಿದ್ದಾರೆ.