‘ಬಿಜೆಪಿಯವರು ತಮಗೆ ಸಂಸ್ಕೃತಿ, ಸಂಸ್ಕಾರ ಇದೆ ಎಂದು ಹೇಳುವುದು ಇದೇ ಏನು? ನಾನು ಹಳ್ಳಿಯಿಂದ ಬಂದವನು. ನನಗೆ ಹೆಗಡೆಗಿಂತಲೂ ಕೆಟ್ಟದಾಗಿ ಬಯ್ಯಲು ಬರುತ್ತದೆ. ಆದರೆ, ಆ ರೀತಿಯ ಭಾಷೆ ಬಳಸಬಾರದು. ಮಣಿಶಂಕರ್ ಅಯ್ಯರ್ ಅವರು ಪ್ರಧಾನಿಗೆ ‘ನೀಚ’ ಎಂಬ ಪದ ಬಳಸಿದ ಕಾರಣಕ್ಕೆ, ಅವರನ್ನು ಪಕ್ಷದಿಂದ ತೆಗೆದುಹಾಕಲಾಗಿದೆ. ಇದನ್ನು ಬಿಜೆಪಿಯಿಂದ ನಿರೀಕ್ಷೆ ಮಾಡಲು ಸಾಧ್ಯವೇ? ಕೋಮುವಾದಿಗಳಿಂದ ನಾವು ಏನನ್ನೂ ನಿರೀಕ್ಷಿಸುವುದಿಲ್ಲ’ ಎಂದರು.