ನೆಲ, ಜಲ, ಪರಿಸರ ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳು ಮಲಿನಗೊಳ್ಳದಂತೆ ನೋಡಿಕೊಳ್ಳುವುದು ಡಿಪಿಸಿಸಿಯ ಕರ್ತವ್ಯ. ಪರಿಸರ ನಾಶ ಅಥವಾ ಹಾನಿ ಆಗಲೇ ಬಾರದು. ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದರೆ ಭಾರಿ ಪ್ರಮಾಣದ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದನ್ನು ನಿರ್ವಹಿಸಲು ಅಗತ್ಯ ಷರತ್ತುಗಳನ್ನು ಡಿಪಿಸಿಸಿ ನಿಗದಿ ಮಾಡಬೇಕಿತ್ತು ಎಂದು ಸ್ವತಂತ್ರ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.