<p><strong>ಹಾರ್ದಾ: </strong>ಪಾವತಿಸದೆ ಉಳಿಸಿಕೊಂಡಿರುವ ₹ 9 ಸಾವಿರ ವಿದ್ಯುತ್ ಬಾಕಿಯನ್ನು ಕಟ್ಟುವಂತೆ ಸೂಚಿಸಲಾಗಿದ್ದ ನೋಟಿಸ್ ಪಡೆದ ನಂತರ ಇಲ್ಲಿನ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸೋಮವಾರ ಬೆಳಿಗ್ಗೆ ಅಬ್ಗಾನ್ ಕಾಲಾ ಹಳ್ಳಿಯ ಬಾವಿಯೊಂದರಲ್ಲಿ ತೇಲುತ್ತಿದ್ದ ಶವವನ್ನು, ರೈತ ದಿನೇಶ್ ಪಾಂಡೆ(60) ಅವರದ್ದು ಎಂದು ಗುರುತಿಸಲಾಗಿದೆ ಎಂದು ಇಲ್ಲಿನ ಎಸ್ಪಿ ರಾಜೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.</p>.<p>ಸದ್ಯ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ತನಿಖೆ ಸಂಪೂರ್ಣವಾದ ಬಳಿಕ ಆತ್ಮಹತ್ಯೆಯ ನಿಖರ ಕಾರಣವೇನು ಎಂಬುದು ತಿಳಿದು ಬರಲಿದೆ ಎಂದು ಅವರು ಹೇಳಿದ್ದಾರೆ.</p>.<p>‘ಸ್ಥಳೀಯ ನ್ಯಾಯಾಲಯ ತಮ್ಮ ತಂದೆಗೆ ಮೂರು ದಿನಗಳ ಹಿಂದೆ ಪೊಲೀಸರ ಮೂಲಕ ನೋಟಿಸ್ ನೀಡಿತ್ತು. ಅದರಲ್ಲಿ ₹ 9,111 ವಿದ್ಯುತ್ ಬಾಕಿ ಹಣವನ್ನು ಪಾವತಿಸುವಂತೆ ಸೂಚಿಸಲಾಗಿತ್ತು’ ಎಂದು ಮೃತ ರೈತನ ಮಗ ಸಂಜಯ್ ಪಾಂಡೆ ಹೇಳಿಕೆ ನೀಡಿದ್ದಾರೆ.</p>.<p>ನೋಟಿಸ್ ಪಡೆದಾಗಿನಿಂದ ದಿನೇಶ್ ಪಾಂಡೆ ಒತ್ತಡಕ್ಕೊಳಗಾಗಿದ್ದರು ಹಾಗೂ ಭಾನುವಾರ ಮಧ್ಯಾಹ್ನದಿಂದಲೇ ನಾಪತ್ತೆಯಾಗಿದ್ದರು ಎಂದೂ ಸಂಜಯ್ ಹೇಳಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾರ್ದಾ: </strong>ಪಾವತಿಸದೆ ಉಳಿಸಿಕೊಂಡಿರುವ ₹ 9 ಸಾವಿರ ವಿದ್ಯುತ್ ಬಾಕಿಯನ್ನು ಕಟ್ಟುವಂತೆ ಸೂಚಿಸಲಾಗಿದ್ದ ನೋಟಿಸ್ ಪಡೆದ ನಂತರ ಇಲ್ಲಿನ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸೋಮವಾರ ಬೆಳಿಗ್ಗೆ ಅಬ್ಗಾನ್ ಕಾಲಾ ಹಳ್ಳಿಯ ಬಾವಿಯೊಂದರಲ್ಲಿ ತೇಲುತ್ತಿದ್ದ ಶವವನ್ನು, ರೈತ ದಿನೇಶ್ ಪಾಂಡೆ(60) ಅವರದ್ದು ಎಂದು ಗುರುತಿಸಲಾಗಿದೆ ಎಂದು ಇಲ್ಲಿನ ಎಸ್ಪಿ ರಾಜೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.</p>.<p>ಸದ್ಯ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ತನಿಖೆ ಸಂಪೂರ್ಣವಾದ ಬಳಿಕ ಆತ್ಮಹತ್ಯೆಯ ನಿಖರ ಕಾರಣವೇನು ಎಂಬುದು ತಿಳಿದು ಬರಲಿದೆ ಎಂದು ಅವರು ಹೇಳಿದ್ದಾರೆ.</p>.<p>‘ಸ್ಥಳೀಯ ನ್ಯಾಯಾಲಯ ತಮ್ಮ ತಂದೆಗೆ ಮೂರು ದಿನಗಳ ಹಿಂದೆ ಪೊಲೀಸರ ಮೂಲಕ ನೋಟಿಸ್ ನೀಡಿತ್ತು. ಅದರಲ್ಲಿ ₹ 9,111 ವಿದ್ಯುತ್ ಬಾಕಿ ಹಣವನ್ನು ಪಾವತಿಸುವಂತೆ ಸೂಚಿಸಲಾಗಿತ್ತು’ ಎಂದು ಮೃತ ರೈತನ ಮಗ ಸಂಜಯ್ ಪಾಂಡೆ ಹೇಳಿಕೆ ನೀಡಿದ್ದಾರೆ.</p>.<p>ನೋಟಿಸ್ ಪಡೆದಾಗಿನಿಂದ ದಿನೇಶ್ ಪಾಂಡೆ ಒತ್ತಡಕ್ಕೊಳಗಾಗಿದ್ದರು ಹಾಗೂ ಭಾನುವಾರ ಮಧ್ಯಾಹ್ನದಿಂದಲೇ ನಾಪತ್ತೆಯಾಗಿದ್ದರು ಎಂದೂ ಸಂಜಯ್ ಹೇಳಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>