ಪತಿಯ ಕೊಲೆ ಪ್ರಕರಣದಲ್ಲಿ ನ್ಯಾಯ ಹುಡುಕುತ್ತಿದ್ದ ತಮ್ಮನ್ನು ಕೆಲವರು ದುರಾಸೆಗೆ ಬಳಸಿಕೊಂಡಾಗಲೂ ಸುಮ್ಮನಿದ್ದುದಾಗಿ ಹೇಳಿದ ಅವರು, ಅಪಹರಣ ವಿಷಯ ಹಬ್ಬಿದಾಗ ಈ ನಿಲುವಿಗೆ ಬರಬೇಕಾಯಿತು ಎಂದರು. ಈ ಬಗ್ಗೆ ದೂರವಾಣಿಯಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಂಗಳವಾರ ಮಾತನಾಡಿದ ಮಲ್ಲಮ್ಮ, ತಾವಿನ್ನೂ ಅಧಿಕೃತವಾಗಿ ಕಾಂಗ್ರೆಸ್ ಸೇರಿಲ್ಲ ಎಂದು ಸ್ಪಷ್ಟಪಡಿಸಿದರು.