ಗ್ರಾಮದ ಸ.ನಂ 43ರಲ್ಲಿರುವ 24 ಎಕರೆ 8 ಗುಂಟೆ ಪ್ರದೇಶ ಖಾತೆ ಕಾನು ಆಗಿದ್ದು, ದೇವರಾಜಗೌಡ ಎಂಬುವವರು ಈ ಪ್ರದೇಶದ ಮಾಲೀಕರು ತಾವೆಂದು ಪ್ರತಿಪಾದಿಸುತ್ತಿದ್ದಾರೆ. ಕಳೆದ ತಿಂಗಳು ಈ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಮರಗಳ ಕಡಿತಲೆ ಆಗುತ್ತಿರುವ ಬಗ್ಗೆ ‘ಪ್ರಜಾವಾಣಿ’ ವಿಸ್ತೃತ ವರದಿ ಪ್ರಕಟಿಸಿತ್ತು.