ಕಾರ್ಯಕ್ರಮದಲ್ಲಿ ಮಾತನಾಡಿದ ದೇವನಹಳ್ಳಿ ಬ್ಲಾಕ್ ಕೆ.ಪಿ.ಸಿ.ಸಿ.ಸದಸ್ಯ ವಿ.ಮಂಜುನಾಥ್, ಯೇಸುಕ್ರಿಸ್ತನ ಸಂದೇಶ ಪ್ರತಿಯೊಬ್ಬರು ಅನುಸರಿಸಬೇಕು. ಭಗವದ್ಗೀತೆ, ಕುರಾನ್, ಬೈಬಲ್ ನಂತಹ ಉತ್ತಮ ಧರ್ಮಗ್ರಂಥಗಳು ಪ್ರಪಂಚದಲ್ಲಿಯೇ ಅತ್ಯುತ್ತಮವಾದ ಗ್ರಂಥಗಳಾಗಿ ಹೊರಹೊಮ್ಮಿವೆ. ಮಾನವರು ಸಾಗಬೇಕಾದ ನಿಜವಾದ ಮಾರ್ಗವನ್ನು, ಪಾಪರಹಿತವಾದ ಜೀವನ ನಡೆಸುವುದು, ಶತ್ರುಗಳನ್ನು ಕ್ಷಮಿಸುವಂತಹ ಗುಣ ಬೈಬಲ್ ಹೇಳಿಕೊಡುತ್ತದೆ. ನಾವು ಎಲ್ಲಾ ಧರ್ಮಗಳನ್ನು ಪ್ರೀತಿಸುವ ಕಾರ್ಯ ಮಾಡಬೇಕಾಗಿದೆ ಎಂದರು.