ನೂರಾರು ಮಂದಿ ಬಾಬಾಬುಡನ್ಗಿರಿಗೆ ತೆರಳಿ ಗುಹೆಯನ್ನು ವೀಕ್ಷಿಸಿದರು. ಗಿರಿಯಲ್ಲಿನ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಂಡರು. ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಕೇಂದ್ರವನ್ನು ಸೌಹಾರ್ದ ಕೇಂದ್ರವಾಗಿ ಉಳಿಸಿಕೊಳ್ಳಬೇಕು. ಶಾಂತ ಕದಡುವ ಯತ್ನ ಮಾಡಬಾರದು’ ಎಂದರು. ಕೋಮುಸೌಹಾರ್ದ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಇದ್ದರು.