‘ಮೊದಲು ನಾನು ದೇವರನ್ನು ಹೆಚ್ಚು ನಂಬುತ್ತಿರಲಿಲ್ಲ. ಆದರೆ, ಈ ಸಿನಿಮಾದ ಕಾರಣದಿಂದಾಗಿ ನನ್ನಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗಿವೆ. ದೇವರಲ್ಲಿ ನಂಬಿಕೆ ಹೆಚ್ಚಾಗಿದೆ’ ಎಂದರು ವೈಷ್ಣವಿ. ‘ಆಪ್ತಮಿತ್ರ’ ಚಿತ್ರದಲ್ಲಿ ಸೌಂದರ್ಯಾ ಅವರು ತೋರಿದ್ದ ಅಭಿನಯದ ಅರ್ಧದಷ್ಟನ್ನು ಮಾಡಲು ಸಾಧ್ಯವಾದರೆ ತಾವು ಗೆದ್ದಂತೆಯೇ ಎಂದು ವೈಷ್ಣವಿ ನಂಬಿಕೊಂಡಿದ್ದಾರೆ.