ಕೈದಿಯೊಬ್ಬ ವಿರುದ್ಧ ಗುಂಪಿನ ಮೂವರು ಕೈದಿಗಳ ಮೇಲೆ ದಾಳಿ ನಡೆಸಿದ್ದೇ ಈ ಜಗಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಜಗಳ ತಾರಕಕ್ಕೇರಿದಾಗ ಅಲ್ಲಿರುವ ಹಾಸಿಗೆಗೆ ಬೆಂಕಿ ಹಚ್ಚಲಾಗಿದೆ. ಈ ಬೆಂಕಿ ಪಕ್ಕದ ಸೆಲ್ಗೂ ಹರಡಿದ್ದು, ಅಲ್ಲಿರುವ ಕೈದಿಗಳು ಸುಟ್ಟು ಕರಕಲಾಗಿದ್ದಾರೆ. ತಕ್ಷಣವೇ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸಿದೆ.