<p><strong>ನವದೆಹಲಿ</strong>: ತಿಂಗಳ ಕನಿಷ್ಠ ಪಿಂಚಣಿ ಮೊತ್ತವನ್ನು ಈಗಿರುವ₹ 1,000 ದಿಂದ ₹ 7,500ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಪಿಂಚಣಿದಾರರು ‘ಭಿಕ್ಷಾ ಆಂದೋಲನ’ ಆರಂಭಿಸಿದ್ದಾರೆ.</p>.<p>ಯೋಜನೆಯಲ್ಲಿ ಸಿಗುತ್ತಿರುವ ಮೊತ್ತ ಅತ್ಯಂತ ಕಡಿಮೆ ಇದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಡಲು ಮತ್ತು ಬೇಡಿಕೆ ಈಡೇರಿಸುವಂತೆ ಮಾಡಲು ಈ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಕಾರ್ಮಿಕರ ಪಿಂಚಣಿ ಯೋಜನೆಯ (1995ರ ಕಾರ್ಮಿಕರ ಪಿಂಚಣಿ ಯೋಜನೆ–ಇಪಿಎಸ್ 95) ಸಂಘರ್ಷ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.</p>.<p>ಜನವರಿ 10ರ ಒಳಗೆ ನಮ್ಮ ಬೇಡಿಕೆ ಈಡೇರದೇ ಇದ್ದಲ್ಲಿ ಆಂದೋನಲ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದೂ ಸಮಿತಿಯು ಎಚ್ಚರಿಕೆ ನೀಡಿದೆ.</p>.<p>ಸದ್ಯ ತಿಂಗಳ ಪಿಂಚಣಿ ಮೊತ್ತ ₹ 1,000 ಇದೆ. ಕೇಂದ್ರ ಸರ್ಕಾರದ ಬಳಿ ಪಿಂಚಣಿ ನಿಧಿ ₹ 3 ಲಕ್ಷ ಕೋಟಿ ಇದೆ. ಹೀಗಿದ್ದರೂ 60 ಲಕ್ಷ ಪಿಂಚಣಿದಾರರಲ್ಲಿ 40 ಲಕ್ಷ ಪಿಂಚಣಿದಾರರು ಪ್ರತಿ ತಿಂಗಳು ₹ 1,500ಕ್ಕಿಂತಲೂ ಕಡಿಮೆ ಮೊತ್ತ ಪಡೆಯುತ್ತಿದ್ದಾರೆ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ತಿಂಗಳ ಕನಿಷ್ಠ ಪಿಂಚಣಿ ಮೊತ್ತವನ್ನು ಈಗಿರುವ₹ 1,000 ದಿಂದ ₹ 7,500ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಪಿಂಚಣಿದಾರರು ‘ಭಿಕ್ಷಾ ಆಂದೋಲನ’ ಆರಂಭಿಸಿದ್ದಾರೆ.</p>.<p>ಯೋಜನೆಯಲ್ಲಿ ಸಿಗುತ್ತಿರುವ ಮೊತ್ತ ಅತ್ಯಂತ ಕಡಿಮೆ ಇದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಡಲು ಮತ್ತು ಬೇಡಿಕೆ ಈಡೇರಿಸುವಂತೆ ಮಾಡಲು ಈ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಕಾರ್ಮಿಕರ ಪಿಂಚಣಿ ಯೋಜನೆಯ (1995ರ ಕಾರ್ಮಿಕರ ಪಿಂಚಣಿ ಯೋಜನೆ–ಇಪಿಎಸ್ 95) ಸಂಘರ್ಷ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.</p>.<p>ಜನವರಿ 10ರ ಒಳಗೆ ನಮ್ಮ ಬೇಡಿಕೆ ಈಡೇರದೇ ಇದ್ದಲ್ಲಿ ಆಂದೋನಲ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದೂ ಸಮಿತಿಯು ಎಚ್ಚರಿಕೆ ನೀಡಿದೆ.</p>.<p>ಸದ್ಯ ತಿಂಗಳ ಪಿಂಚಣಿ ಮೊತ್ತ ₹ 1,000 ಇದೆ. ಕೇಂದ್ರ ಸರ್ಕಾರದ ಬಳಿ ಪಿಂಚಣಿ ನಿಧಿ ₹ 3 ಲಕ್ಷ ಕೋಟಿ ಇದೆ. ಹೀಗಿದ್ದರೂ 60 ಲಕ್ಷ ಪಿಂಚಣಿದಾರರಲ್ಲಿ 40 ಲಕ್ಷ ಪಿಂಚಣಿದಾರರು ಪ್ರತಿ ತಿಂಗಳು ₹ 1,500ಕ್ಕಿಂತಲೂ ಕಡಿಮೆ ಮೊತ್ತ ಪಡೆಯುತ್ತಿದ್ದಾರೆ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>