‘ಸದ್ಯ ಕಲ್ಲಡ್ಕದಲ್ಲಿ ನೆಲೆಸಿದ್ದು, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್ಡಿಪಿಐ) ಆರೋಗ್ಯ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಂಗಳೂರಿನ ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಬೂಟ್ ಇಕ್ಬಾಲ್ (47), ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಬಂದರು ಘಟಕದಲ್ಲಿ ಸಕ್ರಿಯನಾಗಿರುವ ಈತನ ಮಗ ನಿಝಾಂ (21) ಹಾಗೂ ಆಲಡ್ಕ ಪಿಎಫ್ಐ ಘಟಕದಲ್ಲಿ ಸಕ್ರಿಯನಾಗಿರುವ ಪಾಣೆಮಂಗಳೂರು ನಿವಾಸಿ ಮೊಹಮ್ಮದ್ ಷರೀಫ್ (22) ಎಂಬುವವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ’ ಎಂದು ದಕ್ಷಿಣ ಕನ್ನಡ ಎಸ್ಪಿ ಸಿ.ಎಚ್.ಸುಧೀರ್ಕುಮಾರ್ ರೆಡ್ಡಿ ತಿಳಿಸಿದ್ದಾರೆ.