ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳ ಬಗ್ಗೆ ಕಾನೂನು ಕ್ರಮ ಜರುಗಿಸುವಾಗ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಎನ್ನು ವಂತೆ ತಾರತಮ್ಯ ನೀತಿಯನ್ನು ಅನುಸ ರಿಸುತ್ತಿರುವ ಸರ್ಕಾರ, ಹಿಂದೂ ಕಾರ್ಯ ಕರ್ತರ ಹತ್ಯೆಯ ವಿಚಾರದಲ್ಲಿ ತನ್ನ ಜಾಣ ಕುರುಡು ಪ್ರದರ್ಶಿಸುತ್ತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ನ್ಯಾಯ ಒದಗಿ ಸುವ ಭರವಸೆ ಇಲ್ಲವಾಗಿದೆ. ಈ ಹತ್ಯೆ ಪ್ರಕರಣಗಳನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.