ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಶಾಂತ್ ಪೂಜಾರಿ, ರಾಜೀವ್ ಕೊಟ್ಯಾನ್, ಶರತ್ ಮಡಿವಾಳ ಸೇರಿದಂತೆ ಇದುವರೆಗೆ ಕರಾವಳಿ ಭಾಗದಲ್ಲಿ 21 ಮಂದಿ ಹಿಂದೂಗಳ ಕೊಲೆಯಾಗಿದೆ. ಕೇರಳ ಮಾದರಿಯಲ್ಲಿ ಘಟನೆಗಳು ಮುಂದುವರೆದಿವೆ. ಇದಕ್ಕೆಲ್ಲ ರಾಜ್ಯ ಸರ್ಕಾರವೇ ಕಾರಣ. ನಿಜವಾದ ಅಪರಾಧಿಗಳನ್ನು ತಕ್ಷಣ ಬಂಧಿಸಬೇಕು’ ಎಂದು ಆಗ್ರಹಿಸಿದರು.