ಮುಂಜಾಗ್ರತಾ ಕ್ರಮವಾಗಿ ಜಾತ್ರೆಗೆ ಬರುವ ವಾಹನಗಳನ್ನು ತಪಾಸಣೆಗೆ ಒಳಪಡಿಸಿ, ತಂದಿದ್ದ ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಯಿತು. ಆದರೆ, ಅನೇಕ ಭಕ್ತರು ಮೊದಲೇ ಮಾಂಸವನ್ನು ಸಿದ್ಧಪಡಿಸಿಕೊಂಡು ತಂದು ಜಾತ್ರೆಯ ಹೊರವಲಯದಲ್ಲಿ ನಿರ್ಮಿಸಿಕೊಂಡಿದ್ದ ಬಿಡಾರದಲ್ಲಿ ಆಹಾರ ತಯಾರಿಸಿದರು. ಕೆಲವರು ಪೊಲೀಸರ ಕಣ್ತಪ್ಪಿಸಿ ಬೇರೆ ಮಾರ್ಗಗಳಲ್ಲಿ ಕುರಿ, ಕೋಳಿಗಳನ್ನು ತಂದು ಕೊಯ್ದು ಗದ್ದಿಗೆ, ಕಂಡಾಯ ಮತ್ತು ಬಿರುದುಗಳಿಗೆ ಎಡೆ ಅರ್ಪಿಸಿ, ಪಂಕ್ತಿಯಲ್ಲಿ ಭೋಜನ ಸವಿದರು.