ಇತ್ತೀಚೆಗೆ ಈ ಪ್ರಶಸ್ತಿಗಳನ್ನು ಯಾವ ರೀತಿ, ಎಂತಹವರಿಗೆ ಕೊಡಲಾಗುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದ ಗುಟ್ಟು! ಪ್ರಶಸ್ತಿಗಳನ್ನು ಕೊಡುವಾಗ ಅವರು ಖ್ಯಾತನಾಮರೇ, ಅವರಿಗೆ ಈ ಹಿಂದೆ ಯಾವ ಪ್ರಶಸ್ತಿ ಬಂದಿದೆ, ಬಂದಿಲ್ಲವಾದಲ್ಲಿ ಇದೂ ಬೇಡ ಎಂದು ನಿರ್ಧರಿಸಲಾಗುತ್ತದೆ. ಮುಂಚೂಣಿಯ ಸಾಹಿತಿಗಳಲ್ಲಿ ಕೂಡ ಪ್ರಶಸ್ತಿಗಳನ್ನು ಪಡೆಯಲು ‘ನನಗೆ ನೀ ನೆರವಾಗು, ನಿನಗೆ ನಾ ನೆರವಾಗುವೆನು!’ ಎಂಬ ಅಲಿಖಿತ ತತ್ವವನ್ನು ಆಚರಿಸಲಾಗುತ್ತದೆ! ಅವರನ್ನು ಬಿಟ್ಟು ಪ್ರಶಸ್ತಿಗಳು ಇನ್ನು ಯಾರ ಸನಿಹಕ್ಕೂ ಸುಳಿಯುವುದಿಲ್ಲ!