ಶ್ರೀರಾಮನ ಪಟ್ಟಾಭಿಷೇಕಕ್ಕೂ ಬಂಜಾರ ನೃತ್ಯಕ್ಕೂ ಎತ್ತಣ ಸಂಬಂಧವಯ್ಯಾ? ಸಂತಸ ಸೂಸುವ ಕ್ಷಣ ಯಾವುದಾದರೇನು ನೃತ್ಯಗಾರರಿಗೆ ಅದೊಂದು ನೆಪವಷ್ಟೇ. ಬಣ್ಣದ ಲೋಕದಲ್ಲಿ ಮೈಮರೆತು ಮಿಂದೇಳುವ ಆ ಕ್ಷಣಕ್ಕೆ ರಾಗ–ತಾಳದ ಸೊಗಸು ಸೇರಿದರೆ ಎಂಥ ಅರಸಿಕನಿಗೂ ಒಂದೆರಡು ಹೆಜ್ಜೆ ಹಾಕುವ ಉಮೇದು ಬಾರದಿರದು. ವರ್ಣರಂಜಿತ ಲೋಕವೊಂದು ಮೊನ್ನೆ ನಗರದಲ್ಲಿ ಸೃಷ್ಟಿಯಾಗಿತ್ತು. ಬೇರೆಬೇರೆ ರಾಜ್ಯಗಳ ನೃತ್ಯದ ಸೊಬಗು ಅನಾವರಣಗೊಂಡಿತ್ತು. ಇಂಥ ಅಪೂರ್ವ ನೃತ್ಯಲೋಕವನ್ನು ವೇದಿಕೆ ಮೇಲೆ ಸೃಷ್ಟಿಸಿದ್ದು ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ. ನೃತ್ಯಲೋಕದ ರಸದೌತಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದವರು ಪಿ.ಎಸ್.ಕೃಷ್ಣಕುಮಾರ್