ಜನಸಾಮಾನ್ಯರ ಮನಗಳಲ್ಲಿ ಈ ಭಾವನೆ ವರ್ಷಗಳ ಹಿಂದೆಯೇ ಮೂಡಿಬಿಟ್ಟಿದೆ. ಜನರು ಪ್ರತಿಭಟನೆ ನಡೆಸಿ, ಅರಚಾಡಿ, ಕೂಗಾಡಿದರೂ ಸರ್ಕಾರದ್ದು ಗಟ್ಟಿಚರ್ಮ ಎಂಬುದು ಸಾಬೀತಾಗುತ್ತಲೇ ಇದೆ. ಈಗ ನ್ಯಾಯಮೂರ್ತಿಗಳು ಸಹ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರ್ಕಾರ ಇನ್ನು ಮುಂದಾದರೂ ಆಡಳಿತದಲ್ಲಿ ಚುರುಕು ಹಾಗೂ ಗಟ್ಟಿತನ ತರಬಲ್ಲದೇ?