‘ನಮಗೆ ಮಕ್ಕಳಿಲ್ಲ, ಬಂಧು ಬಳಗವಿಲ್ಲ, ಸಮಾಜಕ್ಕೆ ಮತ್ತು ವೈಯಕ್ತಿಕವಾಗಿ ನಾವು ಯಾವುದೇ ರೀತಿಯಲ್ಲಿಯೂ ಪ್ರಯೋಜನವಿಲ್ಲ. ಈ ಭೂಮಿ ಮೇಲೆ ಬದುಕಿ ಪ್ರಯೋಜನವಿಲ್ಲ. ನಾವು ಕಾಯಿಲೆ ಬಿದ್ದರೆ ನಮ್ಮ ಜವಾಬ್ದಾರಿಯನ್ನು ಯಾರ ಹೆಗಲ ಮೇಲೂ ಹಾಕಲು ಇಷ್ಟವಿಲ್ಲ. ಆದ್ದರಿಂದ ನಮಗೆ ದಯಾಮರಣಕ್ಕೆ ಅನುಮತಿ ನೀಡಿ’ ಎಂದು ಮುಂಬೈನ ನಾರಾಯಣ್ ಲಾವಟೆ(86) ಮತ್ತು ಇರಾವತಿ (79) ಕಳೆದ ಡಿಸೆಂಬರ್ 21ರಂದು ರಾಮನಾಥ ಕೋವಿಂದ್ಗೆ ಮನವಿ ಸಲ್ಲಿಸಿದ್ದಾರೆ.