ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿ: ಸಾವಿನಲ್ಲೂ ಒಂದಾದ ದಂಪತಿ

Last Updated 12 ಜನವರಿ 2018, 19:30 IST
ಅಕ್ಷರ ಗಾತ್ರ

ಹೊಳೆಹೊನ್ನೂರು: ಭದ್ರಾವತಿ ತಾಲ್ಲೂಕಿನ ಹಂಚಿನ ಸಿದ್ದಾಪುರ ಗ್ರಾಮದಲ್ಲಿ ಶುಕ್ರವಾರ ಪತಿಯ ನಿಧನದಿಂದ ಆಘಾತಗೊಂಡು ಅದೇ ದಿನ ಪತ್ನಿಯೂ ಮೃತಪಟ್ಟಿದ್ದಾಳೆ.

ಹನುಮಂತಪ್ಪ (75) ಹಾಗೂ ಸರೋಜಮ್ಮ (52) ಸಾವಿನಲ್ಲೂ ಒಂದಾದ ದಂಪತಿ.

ಕೆಮ್ಮು ಮತ್ತು ಕಫ ಸಮಸ್ಯೆಯಿಂದ ಬಳಲುತ್ತಿದ್ದ ಹನುಮಂತಪ್ಪ ಅವರು ಶುಕ್ರವಾರ ಬೆಳಗಿನಜಾವ 5 ಗಂಟೆಗೆ ನಿಧನರಾದರು. ಪತಿಯ ಸಾವಿನ ದುಃಖದಿಂದ ಸರೋಜಮ್ಮ ಅವರೂ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಾವನ್ನಪ್ಪಿದರು.

ದಂಪತಿ ಮೃತಪಟ್ಟ ಸುದ್ದಿ ತಿಳಿದು ಅಕ್ಕ–ಪಕ್ಕದ ಗ್ರಾಮಸ್ಥರು, ಸಂಬಂಧಿಕರು ಮನೆಗೆ ಬಂದು ಅಂತಿಮ ದರ್ಶನ ಪಡೆದರು. ಪತಿ ಹಾಗೂ ಪತ್ನಿಯ ದೇಹವನ್ನು ಅವರ ಜಮೀನಿನಲ್ಲಿ ಅಕ್ಕ ಪಕ್ಕ ಗುಂಡಿ ತೋಡಿ ಅಂತ್ಯಸಂಸ್ಕಾರ ಮಾಡಲಾಯಿತು. ದಂಪತಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT