‘ಅತಿ ವೇಗದ ಚಾಲನೆ ಅಥವಾ ನಿದ್ದೆ ಮಂಪರಿನಲ್ಲಿ ದುರಂತ ಸಂಭವಿಸಿರಬಹುದು’ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದರು. ಬೆಳ್ತಂಗಡಿಯ ಬಿಜೋ ಜಾರ್ಜ್ (26), ಡಯಾನಾ (20), ಸೋನಿಯಾ (28), ಧರ್ಮಸ್ಥಳದ ರಾಕೇಶ್ ಪ್ರಭು (26), ಬೆಂಗಳೂರಿನ ಬಾಪೂಜಿ ನಗರದ ಗಂಗಾಧರ್ (50), ಬಸ್ ಚಾಲಕ ಬಸವನಬಾಗೇವಾಡಿಯ ಶಿವಪ್ಪ ಛಲವಾದಿ (42) ಮತ್ತು ನಿರ್ವಾಹಕ ರಾಯಚೂರಿನ ಲಕ್ಷ್ಮಣ್ ಮೃತರು.