ಕಲಬುರ್ಗಿ: ಇಲ್ಲಿನ ರಾಮ ಮಂದಿರ ವೃತ್ತದಲ್ಲಿ ಭಾನುವಾರ ಲಾರಿ ಮತ್ತು ಎನ್ಇಕೆಆರ್ಟಿಸಿ ಬಸ್ ಮಧ್ಯೆ ಡಿಕ್ಕಿ ಸಂಭವಿಸಿದ್ದು, 10 ಜನ ಪ್ರಯಾಣಿಕರಿಗೆ ಗಾಯಗಳಾಗಿವೆ.
ಬಸ್ ಕಲಬುರ್ಗಿಯಿಂದ ರಾಯಚೂರಿಗೆ ತೆರಳುತ್ತಿತ್ತು. ಸಿಮೆಂಟ್ ತುಂಬಿದ್ದ ಲಾರಿಯು ಶಹಾಬಾದ್ನಿಂದ ಅಫಜಲಪುರ ಕಡೆಗೆ ತೆರಳುತ್ತಿತ್ತು.
‘ಬಸ್ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕಿತ್ಸೆಗೆ ಸ್ಪಂದಿಸದೆ ಸಾವು: ಕಲಬುರ್ಗಿ: ಬೈಕ್ನಿಂದ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಗುರುಬಾಯಿ ಕಾಮಶೆಟ್ಟಿ (60) ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟವರು.
ಇವರು ಕಲಬುರ್ಗಿ ತಾಲ್ಲೂಕು ಕಗ್ಗನಮಡಿ–ಯಳವಂತಗಿ ಕ್ರಾಸ್ ಬಳಿ ಈಚೆಗೆ ಬೈಕ್ ಮೇಲಿಂದ ಆಯತಪ್ಪಿ ಕೆಳಕ್ಕೆ ಬಿದ್ದಿದ್ದರು. ತೀವ್ರ ಗಾಯಗೊಂಡಿದ್ದ ಇವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.