‘ಈ ವರದಿ ದಲಿತರಲ್ಲೇ ಸಂಘರ್ಷ ಹುಟ್ಟು ಹಾಕಿದೆ. 99 ಜಾತಿಗಳು ಈ ವರದಿಗೆ ವಿರುದ್ಧವಾಗಿವೆ. ಈ ವರದಿ ಜಾರಿಯನ್ನು ವಿರೋಧಿಸುವ ಸಲುವಾಗಿ ಕೊರಮ, ಕೊರಚ, ಭೊವಿ, ಲಂಬಾಣಿ ಸೇರಿದಂತೆ ವಿವಿಧ ಜಾತಿ ಸಂಘಟನೆಗಳ ಮುಖಂಡರು ನಗರದ ಜಸ್ಮಾ ದೇವಿ ಭವನದಲ್ಲಿ ಇದೇ 18ರಂದು ಸಭೆ ಸೇರಿ ಮುಂದಿನ ಹೋರಾಟಗಳ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದೇವೆ’ ಎಂದು ಅಖಿಲ ಕರ್ನಾಟಕ ಕೊರಮರ ಸಂಘದ ಅಧ್ಯಕ್ಷ ಜಿ. ಮಾದೇಶ್ ತಿಳಿಸಿದರು.