‘ಸಾಂಸ್ಕೃತಿಕ ಚಿಂತಕ, ಸಮಾನತೆಯ ಪ್ರತಿಪಾದಕ, ಭಕ್ತ ಶ್ರೇಷ್ಠ ಕನಕದಾಸರ ಬಹುಮುಖಿ ಚಿಂತನೆಗಳನ್ನು ವಿವಿಧ ತಲೆಮಾರುಗಳ ಚಿಂತಕರಿಂದ ಚರ್ಚೆ, ಸಂವಾದ, ವಿಚಾರ ವಿನಿಮಯದ ಮೂಲಕ ಕನ್ನಡ ಮತ್ತು ಕನಕ ಸಂಸ್ಕೃತಿಯನ್ನು ವಿಸ್ತರಿಸುವ ಕಾರ್ಯಕ್ರಮ ಇದಾಗಿದ್ದು, ಅತ್ಯಂತ ವ್ಯವಸ್ಥಿತ ಹಾಗೂ ಮಾದರಿಯಾಗಿ ನಡೆಸಲು ಎಲ್ಲ ಅಧಿಕಾರಿಗಳು ಸಮನ್ವಯದಿಂದ ಶ್ರಮಿಸಬೇಕು’ ಎಂದು ಅವರು ಸೂಚನೆ ನೀಡಿದರು.