‘ನನ್ನ ಮಗ ನಾಗರಾಜ್ ಗಾಂಧಿಯ ಆರತಕ್ಷತೆ ಗುರುವಾರ (ಜ.18) ಸಂಜೆ 6.30ಕ್ಕೆ ಇದೆ. ಜ.19ರಂದು ಬೆಳಗ್ಗೆ 8.30ಕ್ಕೆ ಮುಹೂರ್ತ ಇದೆ. ಆದರೆ, ಗುರುವಾರ ಶ್ರೀರಾಂಪುರ ಠಾಣೆಗೆ ಹಾಜರಾಗಬೇಕಿದ್ದು ಜಾಮೀನು ಷರತ್ತು ಪಾಲಿಸಲು ಕಷ್ಟವಾಗುತ್ತಿದೆ. ಆದ್ದರಿಂದ ಠಾಣೆಗೆ ಹಾಜರಾಗುವುದಕ್ಕೆ ವಿನಾಯ್ತಿ ನೀಡಬೇಕು’ ಎಂದು ಕೋರಿ ವಿ.ನಾಗರಾಜ್ ರಿಟ್ ಅರ್ಜಿ ಸಲ್ಲಿಸಿದ್ದರು.