ದಿನಪತ್ರಿಕೆ, ಕಸದ ರಾಶಿ: ‘ಕಲಾಧರ್ ಅವರ ಮನೆ ಮುಂದೆ ಏಳೆಂಟು ದಿನಪತ್ರಿಕೆಗಳು ಬಿದ್ದಿದ್ದವು. ಆವರಣದ ಕಸ ಕೂಡ ಗುಡಿಸಿರಲಿಲ್ಲ. ಗೇಟ್ಗೂ ಬೀಗ ಹಾಕಿತ್ತು. ಈ ಅಂಶಗಳಿಂದ ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಕಳ್ಳರು ಅರಿತಿದ್ದಾರೆ. ಬಳಿಕ ಸಂಚು ರೂಪಿಸಿ ಜನವರಿ 16ರ ರಾತ್ರಿ ಕನ್ನ ಹಾಕಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.