ಸಾವನದುರ್ಗದ ಅರಣ್ಯದಂಚಿನ ಗ್ರಾಮಗಳಾದ ಗುಡ್ಡಹಳ್ಳಿ, ಪೋಲೋಹಳ್ಳಿ, ಕರಲಮಂಗಲ, ಜೋಡುಗಟ್ಟೆ, ನಾಯಕನಪಾಳ್ಯ, ವೀರೇಗೌಡನ ದೊಡ್ಡಿ, ದಬ್ಬಗುಳಿ, ಮಂಚನಬೆಲೆ, ಮರಲಗೊಂಡಲ, ದೊಡ್ಡಮಸ್ಕಲ್, ಚಿಕ್ಕತೊರೆಪಾಳ್ಯ, ಬಾಚೇನ ಹಟ್ಟಿ, ಅಡಕಮಾರನ ಹಳ್ಳಿ, ಭಂಟರ ಕುಪ್ಪೆ, ತಗಚಕುಪ್ಪೆ, ಕಲ್ಲೂರು, ಮಂಚನಬೆಲೆ ಇತರೆ ಗ್ರಾಮಗಳ ರೈತರ ಪಾಲಿಗೆ ಕಾಡಿನಿಂದ ಬರುವ ಕಾಡಾನೆ, ಚಿರತೆ, ಕರಡಿ, ನರಿ, ಸೀಳು ನಾಯಿ, ನವಿಲು, ಕಾಡುಹಂದಿಗಳ ಕಾಟದಿಂದ ತತ್ತರಿಸಿರುವ ರೈತರು ವಿಎಸ್ಎಸ್ಎನ್ಗಳಲ್ಲಿ ಮಾಡಿರುವ ಸಾಲ
ಕಟ್ಟಲಾರದೆ ಆತ್ಮಹತ್ಯೆ ಮಾಡಿಕೊಳ್ಳಬೇಕಿದೆ ಎಂದು ರೈತ ಗಂಗಯ್ಯ ಅಳಲು ತೋಡಿಕೊಂಡರು.