ಮುಂಬೈ: ಸೈಯದ್ ಮುಷ್ತಾಕ್ ಟ್ವೀಟಿ– 20 ಕ್ರಿಕೆಟ್ ಟೂರ್ನಿಯಲ್ಲಿ ಅಂಪೈರ್ ಜತೆಗೆ ವಾಗ್ವಾದ ನಡೆಸಿದ್ದ ಹೈದರಾಬಾದ್ ತಂಡದ ನಾಯಕ ಅಂಬಾಟಿ ರಾಯುಡು ಅವರಿಗೆ ಭಾರತೀಯ ನಿಯಂತ್ರಣ ಮಂಡಳಿ(ಬಿಸಿಸಿಐ) ಮುಂದಿನ ಎರಡು ಪಂದ್ಯಗಳಿಗೆ ನಿಷೇಧ ವಿಧಿಸಿದೆ.
ಅಂಬಾಟಿ ರಾಯುಡು ಅವರು ಬಿಸಿಸಿಐನ ‘ನೀತಿ ಸಂಹಿತೆ’ ಉಲ್ಲಂಘನೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.