ಅಲ್ಲದೆ ರಥದ ಸಂದುಗಳಲ್ಲಿ ಸಿಲುಕುವ ಹಣ್ಣು ನಿಧಾನಕ್ಕೆ ಕೊಳೆಯುತ್ತಾ ತನ್ನೊಂದಿಗೆ ರಥದ ಕಟ್ಟಿಗೆಯನ್ನೂ ಕೊಳೆಯಿಸಿ ಹಾನಿ ಉಂಟು ಮಾಡುತ್ತದೆ. ಭವಿಷ್ಯದಲ್ಲಿ ರಥದ ಸುರಕ್ಷತೆಗೆ ಆತಂಕ ತರುತ್ತದೆ. ಭಕ್ತರ ಹೊಸ ಬಟ್ಟೆ, ತೇರಿನ ಬಟ್ಟೆಗಳೂ ಹಣ್ಣಿನ ದಾಳಿಗೆ ಒಳಗಾಗಿ ಅಂದಗೆಟ್ಟು ನಿರುಪಯುಕ್ತಗೊಳ್ಳುತ್ತವೆ. ಭಕ್ತರ ಮುಖ, ಕಣ್ಣುಗಳನ್ನು ಗಾಸಿಗೊಳಿಸಿದ ನಿದರ್ಶನಗಳೂ ಇವೆ.