ನಡೆದಿದ್ದು ಇಷ್ಟು: ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಧು ಪಾಲೇಗೌಡ ಮತ್ತು ತಂಡದವರು ಸರ್ಕಲ್ನಲ್ಲಿ ಶಾಮಿಯಾನ ಹಾಕಿ ಪ್ರತಿಭಟನೆಗೆ ಸಿದ್ಧತೆ ನಡೆಸಿದರು. ಇದನ್ನು ಗಮನಿಸಿದ ಚಿತ್ರದುರ್ಗ ವಿಧಾನಸಭೆ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಹಸನ್ ತಾಹೀರ್, ಶೌಕತ್, ರಫಿ, ರೆಹಮಾನ್, ಸ್ಥಳಕ್ಕೆ ಬಂದು ‘ನಮ್ಮನ್ನು ಕರೆಯದೇ ಪಕೋಡ ಜಾತ್ರೆ ಏಕೆ ಮಾಡುತ್ತಿದ್ದೀರಿ’ ಎಂದು ಮಧುಪಾಲೇಗೌಡರನ್ನು ಪ್ರಶ್ನಿಸಿದರು. ಮಾತಿಗೆ ಮಾತು ಬೆಳೆದು ಜಟಾಪಟಿಗೆ ಕಾರಣವಾಯಿತು.