ಕರ್ನಾಟಕದಲ್ಲಿ 54,000 ಎಕರೆ ವಕ್ಫ್ ಆಸ್ತಿಯಿದ್ದು, ಅಂದಾಜು 30,000 ಎಕರೆಯನ್ನು ಬಲಾಢ್ಯರು, ರಾಜಕಾರಣಿಗಳು ಕಬಳಿಸಿದ್ದಾರೆ. ಈ ಆಸ್ತಿಯ ಮೌಲ್ಯ ₹15 ಲಕ್ಷ ಕೋಟಿಯಿಂದ ₹20 ಲಕ್ಷ ಕೋಟಿಯಷ್ಟಿದೆ. ಇದನ್ನು ಸ್ವಾಧೀನ ಪಡಿಸಿಕೊಂಡು, ಮುಸ್ಲಿಂ ಸಮುದಾಯಕ್ಕೆ ಸೇರಿದ ಆಸ್ತಿಯನ್ನು ರಕ್ಷಿಸಬೇಕಾದ ಸರ್ಕಾರ ಕೊಳ್ಳೆ ಹೊಡೆದಿರುವವರ ಪರವಾಗಿ ನಿಂತಿದೆ ಎಂದೂ ಅವರು ಹೇಳಿಕೆಯಲ್ಲಿ ದೂರಿದ್ದಾರೆ.