<p><strong>ವಿಜಯಪುರ: </strong>ಬೆಳ್ಳುಳ್ಳಿ ರಾಶಿ ಮಾಡಿ ಮಾರುಕಟ್ಟೆಗೆ ತರುತ್ತಿರುವ ಹೊತ್ತಿಗೆ ಬೆಲೆ ಕುಸಿದಿದೆ. ಕನಿಷ್ಠ ದರ ಸಿಗುತ್ತಿರುವುದರಿಂದ ಬೆಳೆಗಾರರು ದಿಕ್ಕು ತೋಚದಂತಾಗಿದ್ದಾರೆ. ಎರಡು ತಿಂಗಳ ಹಿಂದೆ ಪ್ರತಿ ಕ್ವಿಂಟಲ್ಗೆ ₹ 10,000 ಆಸುಪಾಸಿನಲ್ಲಿದ್ದ ಧಾರಣೆ, ಇದೀಗ ಕೇವಲ ₹ 2,000ಕ್ಕೆ ಕುಸಿದಿದೆ.</p>.<p>‘ಮೂರ್ ವರ್ಸದ ಹಿಂದೆ ಬೆಳ್ಳುಳ್ಳಿ ಬೆಳೆಯಲಾರಂಭಿಸಿದ್ದೆವು. ಬೆಳಿ ಚಲೋ ಬಂದಿತ್ತು. ಧಾರಣೆಯೂ ಕೈಗತ್ತಿತ್ತು. ಆದ್ರ, ಈ ಬಾರಿ ಬೆಲೆ ಪಾತಾಳಕ್ಕೆ ಕುಸಿದೈತಿ. ಏನ್ ಮಾಡ್ಬೇಕು ಗೊತ್ತಾಗವಲ್ದಾಗೈತಿ’ ಎಂದು ಬಸವನಬಾಗೇವಾಡಿ ತಾಲ್ಲೂಕು ಹಂಚಿನಾಳ ಗ್ರಾಮದ ರೈತ ಸೋಮಶೇಖರ ಬಿರಾದಾರ ಅಲವತ್ತುಕೊಂಡರು. ‘ಮಾಡ್ದ ಖರ್ಚು ಹುಟ್ಟವಲ್ದು. ವಿಧಿಯಿಲ್ಲದೆ ಸ್ವಲ್ಪ, ಸ್ವಲ್ಪ ಮಾರಾಟ ಮಾಡಿನಿ.</p>.<p>ಬೆಳಗಾವಿ ಮಾರುಕಟ್ಯಾಗ ಪ್ರತಿ ಕ್ವಿಂಟಲ್ಗೆ ₹ 1,800 ಸಿಕ್ಕರೆ, ನಿಡಗುಂದಿ ಮಾರುಕಟ್ಟೆಯಲ್ಲಿ ₹ 2,100 ಸಿಕ್ಕಿತ್ತು. ವಿಜಯಪುರದಲ್ಲಿ ₹ 1,800 ಸಿಕ್ತು. ಇದು ಯಾವುದಕ್ಕೂ ಸಾಲದು. ಕನಿಷ್ಠ ₹ 5000–6000 ಸಿಕ್ಕರೆ ಒಳ್ಳೆದ. ಇಲ್ಲದಿದ್ದರೆ, ಸೊಸೈಟಿ ಹಾಗೂ ಬ್ಯಾಂಕ್ ಸಾಲ ಮುಟ್ಸಕ್ಕಾಗಲ್ಲ. ಕಟ್ಟದಿದ್ರೆ ಬಡ್ಡಿ ಬೆಳೆಯುತ್ತೆ. ಬದುಕ ಹ್ಯಾಂಗ ಸಾಗಿಸ್ಬೇಕು ಎಂಬುದೇ ತಿಳಿದಂಗಾಗಿದೆ’ ಎಂದರು.</p>.<p>‘ಪ್ರತಿ ಕ್ವಿಂಟಲ್ ಬೀಜಕ್ಕೆ ₹ 12,000 ಆಗುತ್ತೆ. ಒಂದ್ ಎಕ್ರೆಗೆ ಮೂರು ಕ್ವಿಂಟಲ್ ಬೇಕಂದ್ರೂ ಕನಿಷ್ಠ ₹ 50,000 ಖರ್ಚು ಆಗ್ತದ. 30 ಕ್ವಿಂಟಲ್ ಉತ್ಪನ್ನ ಬಂದ್ರೆ, ಈಗಿನ ಧಾರಣೆಯಲ್ಲಿ ಬರೋಬ್ಬರಿ ₹ 60,000 ರೊಕ್ಕ ಸಿಗ್ಬಹುದು.</p>.<p>ನಮ್ಮ ಕೂಲಿ ಸಹ ನೀಗಂಗಿಲ್ಲ’ ಎಂದು ನರಸಲಗಿಯ ಆನಂದಗೌಡ ಪಾಟೀಲ ತಿಳಿಸಿದರು. ‘ನರಸಲಗಿಯಲ್ಲಿ ಈ ಹಿಂದೆ ಹೆಚ್ಚಾಗಿ ಉಳ್ಳಾಗಡ್ಡಿ ಬೆಳಿತಿದ್ರು. ಬೆಲೆ ಏರಿಳಿತದ ಹೊಡೆತಕ್ಕೆ ಅಂಜಿ, ಬೆಳ್ಳುಳ್ಳಿ ಬೆಳೆಯಲು ಕೈಹಚ್ಚಿದವರೇ ಹೆಚ್ಚು. ಈ ಬಾರಿ ಬೆಳ್ಳುಳ್ಳಿ ಧಾರಣೆಯೂ ಉಲ್ಟಾ ಹೊಡೆದಿದೆ’ ಎಂದು ರೈತ ಶಂಕರಗೌಡ ಬಿರಾದಾರ ತಿಳಿಸಿದರು.</p>.<p>‘ರಾಜ್ಯದ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬೆಳ್ಳುಳ್ಳಿ ಬೆಳೆಯ ಲಾಗುತ್ತಿದೆ. ಹಾವೇರಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಚಾಮರಾಜನಗರ ಹಾಗೂ ಬೀದರ್ ಜಿಲ್ಲೆಗಳಲ್ಲಿಯೂ ಬೆಳೆಯಲಾಗುತ್ತದೆ. ಆದರೆ, ವ್ಯಾಪ್ತಿಯ ಪ್ರಮಾಣ ಕಡಿಮೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಸ್.ಆರ್.ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>* * </p>.<p>ಟ್ವೀಟರ್ ಮೂಲಕ ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 10 ದಿನಗಳ ಹಿಂದೆಯೇ ಮನವಿ ಮಾಡಿರುವೆ. ಪ್ರತಿಕ್ರಿಯೆ ದೊರೆತಿಲ್ಲ <strong>ಸೋಮಶೇಖರ ಬಿರಾದಾರ, </strong>ಬೆಳೆಗಾರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ಬೆಳ್ಳುಳ್ಳಿ ರಾಶಿ ಮಾಡಿ ಮಾರುಕಟ್ಟೆಗೆ ತರುತ್ತಿರುವ ಹೊತ್ತಿಗೆ ಬೆಲೆ ಕುಸಿದಿದೆ. ಕನಿಷ್ಠ ದರ ಸಿಗುತ್ತಿರುವುದರಿಂದ ಬೆಳೆಗಾರರು ದಿಕ್ಕು ತೋಚದಂತಾಗಿದ್ದಾರೆ. ಎರಡು ತಿಂಗಳ ಹಿಂದೆ ಪ್ರತಿ ಕ್ವಿಂಟಲ್ಗೆ ₹ 10,000 ಆಸುಪಾಸಿನಲ್ಲಿದ್ದ ಧಾರಣೆ, ಇದೀಗ ಕೇವಲ ₹ 2,000ಕ್ಕೆ ಕುಸಿದಿದೆ.</p>.<p>‘ಮೂರ್ ವರ್ಸದ ಹಿಂದೆ ಬೆಳ್ಳುಳ್ಳಿ ಬೆಳೆಯಲಾರಂಭಿಸಿದ್ದೆವು. ಬೆಳಿ ಚಲೋ ಬಂದಿತ್ತು. ಧಾರಣೆಯೂ ಕೈಗತ್ತಿತ್ತು. ಆದ್ರ, ಈ ಬಾರಿ ಬೆಲೆ ಪಾತಾಳಕ್ಕೆ ಕುಸಿದೈತಿ. ಏನ್ ಮಾಡ್ಬೇಕು ಗೊತ್ತಾಗವಲ್ದಾಗೈತಿ’ ಎಂದು ಬಸವನಬಾಗೇವಾಡಿ ತಾಲ್ಲೂಕು ಹಂಚಿನಾಳ ಗ್ರಾಮದ ರೈತ ಸೋಮಶೇಖರ ಬಿರಾದಾರ ಅಲವತ್ತುಕೊಂಡರು. ‘ಮಾಡ್ದ ಖರ್ಚು ಹುಟ್ಟವಲ್ದು. ವಿಧಿಯಿಲ್ಲದೆ ಸ್ವಲ್ಪ, ಸ್ವಲ್ಪ ಮಾರಾಟ ಮಾಡಿನಿ.</p>.<p>ಬೆಳಗಾವಿ ಮಾರುಕಟ್ಯಾಗ ಪ್ರತಿ ಕ್ವಿಂಟಲ್ಗೆ ₹ 1,800 ಸಿಕ್ಕರೆ, ನಿಡಗುಂದಿ ಮಾರುಕಟ್ಟೆಯಲ್ಲಿ ₹ 2,100 ಸಿಕ್ಕಿತ್ತು. ವಿಜಯಪುರದಲ್ಲಿ ₹ 1,800 ಸಿಕ್ತು. ಇದು ಯಾವುದಕ್ಕೂ ಸಾಲದು. ಕನಿಷ್ಠ ₹ 5000–6000 ಸಿಕ್ಕರೆ ಒಳ್ಳೆದ. ಇಲ್ಲದಿದ್ದರೆ, ಸೊಸೈಟಿ ಹಾಗೂ ಬ್ಯಾಂಕ್ ಸಾಲ ಮುಟ್ಸಕ್ಕಾಗಲ್ಲ. ಕಟ್ಟದಿದ್ರೆ ಬಡ್ಡಿ ಬೆಳೆಯುತ್ತೆ. ಬದುಕ ಹ್ಯಾಂಗ ಸಾಗಿಸ್ಬೇಕು ಎಂಬುದೇ ತಿಳಿದಂಗಾಗಿದೆ’ ಎಂದರು.</p>.<p>‘ಪ್ರತಿ ಕ್ವಿಂಟಲ್ ಬೀಜಕ್ಕೆ ₹ 12,000 ಆಗುತ್ತೆ. ಒಂದ್ ಎಕ್ರೆಗೆ ಮೂರು ಕ್ವಿಂಟಲ್ ಬೇಕಂದ್ರೂ ಕನಿಷ್ಠ ₹ 50,000 ಖರ್ಚು ಆಗ್ತದ. 30 ಕ್ವಿಂಟಲ್ ಉತ್ಪನ್ನ ಬಂದ್ರೆ, ಈಗಿನ ಧಾರಣೆಯಲ್ಲಿ ಬರೋಬ್ಬರಿ ₹ 60,000 ರೊಕ್ಕ ಸಿಗ್ಬಹುದು.</p>.<p>ನಮ್ಮ ಕೂಲಿ ಸಹ ನೀಗಂಗಿಲ್ಲ’ ಎಂದು ನರಸಲಗಿಯ ಆನಂದಗೌಡ ಪಾಟೀಲ ತಿಳಿಸಿದರು. ‘ನರಸಲಗಿಯಲ್ಲಿ ಈ ಹಿಂದೆ ಹೆಚ್ಚಾಗಿ ಉಳ್ಳಾಗಡ್ಡಿ ಬೆಳಿತಿದ್ರು. ಬೆಲೆ ಏರಿಳಿತದ ಹೊಡೆತಕ್ಕೆ ಅಂಜಿ, ಬೆಳ್ಳುಳ್ಳಿ ಬೆಳೆಯಲು ಕೈಹಚ್ಚಿದವರೇ ಹೆಚ್ಚು. ಈ ಬಾರಿ ಬೆಳ್ಳುಳ್ಳಿ ಧಾರಣೆಯೂ ಉಲ್ಟಾ ಹೊಡೆದಿದೆ’ ಎಂದು ರೈತ ಶಂಕರಗೌಡ ಬಿರಾದಾರ ತಿಳಿಸಿದರು.</p>.<p>‘ರಾಜ್ಯದ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬೆಳ್ಳುಳ್ಳಿ ಬೆಳೆಯ ಲಾಗುತ್ತಿದೆ. ಹಾವೇರಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಚಾಮರಾಜನಗರ ಹಾಗೂ ಬೀದರ್ ಜಿಲ್ಲೆಗಳಲ್ಲಿಯೂ ಬೆಳೆಯಲಾಗುತ್ತದೆ. ಆದರೆ, ವ್ಯಾಪ್ತಿಯ ಪ್ರಮಾಣ ಕಡಿಮೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಸ್.ಆರ್.ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>* * </p>.<p>ಟ್ವೀಟರ್ ಮೂಲಕ ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 10 ದಿನಗಳ ಹಿಂದೆಯೇ ಮನವಿ ಮಾಡಿರುವೆ. ಪ್ರತಿಕ್ರಿಯೆ ದೊರೆತಿಲ್ಲ <strong>ಸೋಮಶೇಖರ ಬಿರಾದಾರ, </strong>ಬೆಳೆಗಾರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>