ಹಿರಿಯ ಪತ್ರಕರ್ತ ಷಣ್ಮುಖಪ್ಪ ಮಾತನಾಡಿ, 'ಪ್ರೊ. ಎಂ.ಡಿ.ನಂಜುಂಡಸ್ವಾಮಿ ನಂತರ ಅಧ್ಯನಪೂರ್ಣವಾಗಿ ವಿಚಾರಗಳನ್ನು ಮಂಡಿಸುತ್ತಿದ್ದವರು ಕೆ.ಎಸ್.ಪುಟ್ಟಣ್ಣಯ್ಯ. ಅವರು ವಿಧಾನಸೌಧದಲ್ಲಿ ಮಾತನಾಡುತ್ತಿದ್ದರೆ, ನಿಶ್ಯಬ್ಧವಾಗಿ ಕುಳಿತು ಕೇಳುತ್ತಿದ್ದರು. ಇಂಥ ಅಧ್ಯಯನಶೀಲ ರೈತ ನಾಯಕನ ಹೆಸರನ್ನು ಅವರೇ ಹೆಚ್ಚಾಗಿ ಪ್ರತಿಪಾದಿಸುತ್ತಿದ್ದ ಜಲಸಂರಕ್ಷಣಾ ಯೋಜನೆಯೊಂದಕ್ಕೆ ನಾಮಕರಣ ಮಾಡಬೇಕು' ಎಂದು ಸರ್ಕಾರಕ್ಕೆ ಮನವಿ ಮಾಡಿದರು.