‘ಪ್ರಧಾನಿಯವರು ಕೇವಲ ಬೆರಳ ತುದಿಯಿಂದಲೇ ವಸ್ತುಗಳನ್ನು ಕಾಣುವಂತೆ ಮತ್ತು ಮಾಯ ಮಾಡಬಲ್ಲ ಖ್ಯಾತ ಜಾದೂಗಾರರಾಗಿದ್ದಾರೆ. ಯಾವುದೇ ಶ್ರಮವಿಲ್ಲದೆ ಅನೇಕ ವಸ್ತುಗಳು ಕಾಣುವಂತೆ ಮತ್ತು ಕಣ್ಮರೆಯಾಗುವಂತೆ ಅವರು ಮಾಡಿದ್ದಾರೆ. ಹಗರಣಗಳಲ್ಲಿ ಭಾಗಿಯಾದ ಉದ್ಯಮಿಗಳಾದ ವಿಜಯ್ ಮಲ್ಯ, ಲಲಿತ್ ಮೋದಿ ಮತ್ತು ನೀರವ್ ಮೋದಿಯಂಥವರು ಭಾರತದಿಂದ ಕಣ್ಮರೆಯಾಗಿದ್ದು, ಭಾರತದ ಕಾನೂನಿನ ಕೈಗೆ ಸಿಕ್ಕದೆ ವಿದೇಶಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೋದೀಜಿ ಅವರ ಜಾದೂ ಶೀಘ್ರದಲ್ಲೇ ಪ್ರಜಾಪ್ರಭುತ್ವವನ್ನೂ ಭಾರತದಿಂದ ಮಾಯ ಮಾಡಲಿದೆ’ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.