‘ನಿಜವಾದ ಶಾಂತಿ, ನೆಮ್ಮದಿ ಸಿಗದಂತಹ, ಪರಸ್ಪರರ ಸಂಘರ್ಷದ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಯಾರಲ್ಲೂ ಪ್ರೇಮ–ಪ್ರಾಮಾಣಿಕತೆ ಎಂಬುದಿಲ್ಲ. ಮುಖವಾಡ ತೊಟ್ಟ ಜನರ ನಡುವೆ ಇದ್ದೇವೆ. ನಮ್ಮ ನಡೆನುಡಿಯಲ್ಲೇ ಕಹಿತನ ಬೇರು ಬಿಟ್ಟಿದೆ. ಬೇವು ಕಹಿಯಾದರೂ ಅದರಲ್ಲಿ ಔಷಧ ಗುಣವಿದೆ. ಆದರೆ, ನಮ್ಮೊಳಗಿನ ಕಹಿ ಆ ರೀತಿಯದ್ದಲ್ಲ’ ಎಂದು ಸೂಚ್ಯವಾಗಿ ಹೇಳಿದರು.